ದಸರಾ ನಾಡಹಬ್ಬ ಆಚರಣೆ
ಜಿ.ಎಲ್.ಪಿ.ಶಾಲೆ ಕಂಬಾರಿನಲ್ಲಿ ದಸರಾ ನಾಡಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ನಂತರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರತ್ನಪ್ರಭ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಶ್ರೀಮತಿ ಶ್ಯಾಮಲ ಟೀಚರ್ ನಾಡಹಬ್ಬದ ಕಿರು ವಿವರಣೆ ನೀಡಿದರು.ನಂತರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬಳಿಕ ವಿವಿಧ ತರಗತಿಯ ಮಕ್ಕಳಿಂದ ಅಭಿನಯಗೀತೆ,ಸಮೂಹಗಾನ ,ಕತೆ ಹೇಳುವುದು ಮುಂತಾದ ಜರಗಿದವು.